ಸೋಮವಾರ, ನವೆಂಬರ್ 19, 2012












ಕನ್ನಡ ರಾಜ್ಯೋತ್ಸವ: ಕಾವ್ಯ-ಕುಂಚ-ಗಾಯನ
ದಿನಾಂಕ: 18.11.2012ರಂದು ಹೊಸಪೇಟೆ ಎಎಸ್ಪಿ ಕಚೇರಿ ಆವರಣದಲ್ಲಿ, ಪೊಲಿಸ್ ಉಪವಿಭಾಗ ಮತ್ತು ಸರಕಾರಿ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹೊಸಪೇಟೆ ಕಸಾಪ ಘಟಕವು ಕನ್ನಡ ರಾಜ್ಯೋತ್ಸವದ ಅಂಗವಾಗಿ `ಕಾವ್ಯ ಕುಂಚ ಗಾಯನ' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮೋಹನ ನಾಗಮ್ಮನವರು ಕನ್ನಡವನ್ನು ಕಟ್ಟಿ ಬೆಳೆಸಿದ `ಪೂಜ್ಯನೀಯ ಮನ್ರಪ್ಪ'ನನ್ನು (ಥಾಮಸ್ ಮನ್ರೋ), `ವಾಲ್ಟರೆಲೆಟ್'ರನ್ನು (ವಾಲ್ಟರ್ ಎಲಿಯಟ್) ಆತ್ಮೀಯತೆಯಿಂದ ನೆನಪಿಸಿಕೊಂಡರು. ವಿದೇಶಿಗರು ಬಂದು ಸುಮ್ಮನೆ ಸಾಗುತ್ತಿದ್ದ ಕನ್ನಡ ಭಾಷೆಯ ಬೋಡರ್ಿಲ್ಲದ ಬಸ್ಸಿಗೆ ಬೋಡರ್ು ಬರೆಸಿಕೊಟ್ಟಿದ್ದಾರೆ. ಕನ್ನಡದ ಪಯಣ ಸುಗಮವಾಗುವಂತೆ ಹೆದ್ದಾರಿ ನಿಮರ್ಿಸಿದ್ದಾರೆ. ಅಂಥಾದ್ದರಲ್ಲಿ ನಮ್ಮ ಬಹಾದ್ದೂರ್ ಕನರ್ಾಟಕ ಸರಕಾರ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಸೈಯ್ಯಲ್ಲ ಎಂದು ಸೈಯ್ಯೆನ್ನುವಂತೆ ಮಾತನಾಡಿದರು. ಪ್ರತಿಯೊಂದು ಪೊಲಿಸ್ ಇಲಾಖೆಯೂ ತಿಂಗಳಿಗೊಂದು ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಅಪರಾಧಗಳು ಕಮ್ಮಿಯಾಗಬಹುದೆಂದು, ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳ್ಳಾರಿಯ ಎಸ್ಪಿ ಚಂದ್ರಗುಪ್ತರವರಿಗೆ, ಎಎಸ್ಪಿ ರವಿಯವರಿಗೆ ಕಿವಿಮಾತು ಹೇಳಿದರು. `ಕಾವ್ಯ-ಕುಂಚ-ಗಾಯನ' ಕಾರ್ಯಕ್ರಮದಲ್ಲಿ ಅರುಣ್ ಜೋಳದ ಕೂಡ್ಲಿಗಿ, ವಿ.ಹರಿನಾಥ ಬಾಬು, ಪರಶುರಾಮ್ ಕಲಾಲ್, ಟಿ.ಎಂ.ಉಷಾರಾಣಿ, ಶಿವಶಂಕರ್, ಎಂ.ಪಿ.ಎಂ. ಮಂಜುನಾಥ, ಸ್ವರೂಪಾನಂದ ಕೊಟ್ಟೂರು, ಟಿ.ಜಾತಪ್ಪ, ಶರೀಫ್, ಕೊ.ಹಿ.ಮ., ಸೋಮೇಶ್ ಉಪ್ಪಾರ್, ಅಬ್ದುಲ್ ರೆಹಮಾನ್ರವರ ಕವಿತೆಗಳನ್ನು ಓದಿದರು. ಡಾ|ನಾಗಪುಷ್ಪಲತಾ, ಶೀನ ನಾಡೋಳಿ, ನಾಗರಾಜ ಪತ್ತಾರ, ಜೀವನ್ಸಾಬ್ ವಾಲೀಕಾರ್ರವರು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದೂವರೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಮೂಲಕ ಚಳಿಯನ್ನು ತಡೆಗಟ್ಟಿ ಬೆಚ್ಚಗಿನ ವಾತಾವರಣವನ್ನು ನಿಮರ್ಿಸಿದರು. ನೀವು ಇಡೀ ರಾತ್ರಿ ಕವಿತೆ ಓದುತ್ತ, ಹಾಡುತ್ತಲೇ ಇರಿ. ನಾನು ಕುಂಚ ಆಡಿಸುತ್ತಲೇ ಇರುತ್ತೇನೆ ಎನ್ನುವ ಚಿತ್ರ ಕಲಾವಿದ ಬಸವರಾಜ್ ಎಸ್. ಕಲೆಗಾರ್ರವರು ಬಣ್ಣದ ಲೋಕಕ್ಕೆ ಕರೆದೊಯ್ದರು. ಕಾರ್ಯಕ್ರಮದಲ್ಲಿ ವಾಚಿಸಿದ ಕೆಲವು ಕವಿತೆಗಳನ್ನು ಬೆರಳಚ್ಚಿಸಲಾಗಿದೆ.  

ಕನಸಿನಲಿ ಕತ್ತಿ ಹಿರಿದವರು ನಾವು
ಎದ್ದಾಗಲೇ ಗುರಿಯ ಮರೆತವರು

ಮಿಸುನಿ ಮತ್ತಧಿಕ ಧನವಿದ್ದು ಇಲ್ಲ
ದವರೊಡನೆ ಚಿನ್ನಾಟವಾಡುವವರ
ತಿರುಚಿ ಎಚ್ಚರಿಸೆ ನಾವು ಬಂದವರು
ಬಂದು ಮತ್ತವರ ಕೈಕುಲುಕಿ, ತಲೆ
ಹಾಕಿ, ಶೋಷಣೆಗೆ ತಲೆಬಾಗಿದವರು
ಬಗಿ ಹಾಗೆ ಬಾಳ ಹೊರಟವರು ನಾವು

ನೋವು, ತುಳಿತ, ವಂಚನೆ
ಗಳ ತಿರುಗುಣಿಯಲಿ ತಿರುಗುತ್ತಿರುವವರು
ತಿರುಗುತ್ತಲೇ ನಾವು ಕೆರಳಿದವರು
ಕೆರಳುತ್ತಲೇ ಗೋಣೆತ್ತಿದವರು
ಇನ್ನೇನು ಎದ್ದರೋ ಎನ್ನುವಾಗಲೆ
ಹೊದ್ದು ಮಲಗಿದವರು

ಇನ್ನು ಮುಂದಾದರೂ ಅನ್ಯಾಯ ತುಳಿದು
ಅಸತ್ಯವಳಿದು ತುಳಿತ ಕುತಂತ್ರಗಳ
ಮೆಟ್ಟಿ; ಶೂದ್ರ,ದಲಿತ ನೋವುಂದವರೆ
ಶತಶತಮಾನ ನಂಜುಂಡ
ನಂಜುಂಡರಿನ್ನಾದರೇಳಿರೋ
ಈನಾಡ ನತದೃಷ್ಟರೆಲ್ಲರೇಳಿರೋ
ನಿಮ್ಮಿರವ ತೋರಲೆದೆ ತಟ್ಟಿ

ರಾತ್ರಿ ಗುಡಿಮಾಳಗಿ ದುರಸ್ತಿ ಬಯಸಿ
ಮತ್ತೊಂದೂರಿಗೆ ಬೆಳಿಗ್ಗೆದ್ದೋಡುವ
ಜೋಗಿ, ಭಿಕ್ಷುಕರಾಗಬೇಡಿ
ಸಾಗಿ ಛಲದಿಂದ ತೊಡಿರಿ ದೀಕ್ಷೆ
ದೀನ ದಲಿತ ದು:ಖಿತರ ನೋಡಿ
ನಗೆ ನೀಡಲವರ ಹೊಸಬಾಳ್ಗೆ ಕೊಡಿ ರಕ್ಷೆ

* ಕೊ.ಹಿ.ಮ. ಬಸರಕೋಡು
--------------------
ಮನಸು ಮನಸುಗಳ ಮಿಲನ
ಭಾವ ಲಹರಿಯ ಹೊಸ ಗಾನ
ಕನಸುಗಳ ಮೂಟೆಯಲ್ಲಿ ಮಿಂದೆದ್ದ ಜೀವನ
ಜೊತೆಯಾಗಿ ಸಾಗಲೆಂದೇ ಅಂಕುರಿಸಿದ ಮಿಲನ

ಪ್ರೀತಿಯ ಪಯಣದಲ್ಲಿ ಅನುದಿನವೂ ಹೊಸತನದತ್ತ
ಅನುಕ್ಷಣವೂ ಅಹ್ಲಾದಕರ ಬೆಚ್ಚಗಿನ ಭಾವಗಳ ಬುತ್ತಿ
ಸ್ಫುರಿಸುವ ಪ್ರೀತಿಯಲ್ಲಿ ಸರ್ವಸ್ವವೂ ಆಗತ ಅತ್ಯಂತ
ಬರಡಾಗಿದ್ದ ಪ್ರೇಮಿಗಳ ಬಾಳಿನಲ್ಲಿ ಒಲವಿನ ಸಾಕ್ಷಾತ್ಕಾರ

ಪ್ರೀತಿಯ ಉತ್ತುಂಗತೆಯಲ್ಲಿ ಪಿಸುಮಾತು
ಬಿಸಿ ಉಸಿರು, ನವಿರಾದ ಸ್ಪರ್ಶ ಎಲ್ಲವೂ ಹಿತ ಹಿತ
ಸ್ವಚ್ಛಂದ ಬದುಕಿನಲ್ಲಿ ಪ್ರೀತಿಯೇ ಅನಂತ ಅಂತಿಮ
ಮನದ ಮಾತು ಕನಸು ಕನವರಿಕೆಗಳಲ್ಲಿ ಪ್ರೀತಿಯ ಮತ್ತು

ಯಾವ ವಕ್ರದೃಷ್ಟಿ ತಾಗಿತೋ ಇಂತಿಪ್ಪ ಪ್ರೀತಿಗೆ
ನಿದ್ದೆ ನೀರಡಿಕೆಗೆ ಸ್ಪಂದಿಸುತ್ತಿಲ್ಲ ಮನಸು
ದು:ಖದ ಕುಲುಮೆಯಲ್ಲಿ ಬೇಯುತ್ತಿದೆ ಭಾವ ಬದುಕು
ಶಾಂತಸಾಗರದಂತಿದ್ದ ಮನದ ಅಂಗಳದಲ್ಲೀತ ಬಿರುಗಾಳಿ

ಕನಸುಗಳ ಲೋಕದ ಸಂಚಾರ ಅಕ್ಷರಸಹ: ಸಂಚಕಾರವೀಗ
ಮೌನದಲ್ಲಿಯೇ ಉಮ್ಮಳಿಸುತ್ತಿದೆ ದು:ಖ ದುಮ್ಮಾನ
ಬದುಕು ಕಟ್ಟಿಕೊಟ್ಟ ಅದೇ ಪ್ರೀತಿ ಇಂದು
ಬದುಕನ್ನು ಬೆತ್ತಲಾಗಿಸಿದೆ ಕಾರುಣ್ಯವಿಲ್ಲದೆ

ಪ್ರೀತಿ ಪ್ರೇಮ ಪಯಣದ ಹಾದಿಯಲ್ಲಿ
ಎಲ್ಲವೂ ಉಂಟೇ? ಎಂಬ ಪ್ರಶ್ನೆಯನ್ನು ಉಳಿಸಿ
ಹೊರಟಿದೆ ಮತ್ತೊಬ್ಬರ ಬದುಕಿನಲ್ಲಿ ಪ್ರವೇಶಿಸಿ
ಪ್ರೀತಿ ಇಲ್ಲದ ಮೇಲೆ ಕವನವ ನೆನಪಿಸಿ

    ಸ್ವರೂಪಾನಂದ ಎಂ. ಕೊಟ್ಟೂರು
ಕೂಡ್ಲಿಗಿ ಪೊಲಿಸ್ ಠಾಣೆ

--------------------------------------------------------
ತೀಡಿದ ಬೈತಲೆ ನಲಿಯುವ ಮುಂಗುರುಳು
ಇದೆ ಹಾದಿಯಲ್ಲಿ ಹಲವ ದಿನಗಳಿಂದ
ಎದ್ದೆದ್ದು ಕಾಣತೈತೆ ಹಣೆಗುಂಕುಮ
ಕಣ್ಣುಕಣ್ಣುಗಳೆರಡು ಥಳಥಳ ಹೊಳೆತಾವ
ನೂರಾರು ಅರ್ಥ ಕಣ್ತುಂಬಾ ಹೆಣ್ಣಾ ನಿನ್ನ ಕಣ್ತುಂಬಾ

ನಗುಮೊಗದ, ಸೊಗಸಗಾತಿ ಹೆಣ್ಣು
ಮನಸ ತುಂಬಾ ಕನಸ ಬಿತ್ತಿಹ ಹೆಣ್ಣು
ಕನಸಲ್ಲಿ ಕಾಡಿ, ನೆನಪಲ್ಲಿ ಉಳಿಯಲಿಲ್ಲ
ಹಿಡಿದಿಟ್ಟ ಕನಸು ಜಾವದೊತ್ತಿಗೆ ನಿಲ್ಲಲಿಲ್ಲ

ತುಟಿಯಂಚಿನ ನಗೆಯ ಹಿಡಿದಿಟ್ಟು
ನಿನ್ನ ಮೈಮಾಟವ ಮನಸಲ್ಲೇ ಕಡೆದಿಟ್ಟು
ಹೊಸ ಬದುಕಿನ ಸೌಧವ ಕಲ್ಪನೆಯಲ್ಲಿ ತೆರೆದಿಟ್ಟು
ಪ್ರತಿ ಬೆಳಗು, ಸಂಜೆ ಕಾದೆ ಕಷ್ಟಪಟ್ಟು

ಎದೆಬಡಿತದ ಪ್ರತಿಕ್ಷಣವೂ ನಿನ್ನ ನೆನಪು ಕನಸಾಗಿ
ಕಿವಿಯೊಳಗಿನ ಓಲೆಯ ಒನಪು
ಬಳಕುವ ಸೊಂಟದ ಥಳುಕು ಬಳಕು
ಕಾದು ಕಾದು ಸಾಕಾತು ಈ ಬದುಕು

ಆಶೆ ಬತ್ತಿಲ್ಲ ನೆನಪು ಮಾಸಿಲ್ಲ
ನಿನ್ನ ನಗು, ಮೈಮಾಟ ಕಾಡುತ್ತಲಿದೆಯಲ್ಲ
ಬಾ ಬೇಗ ಹೆಣ್ಣೇ ನನ್ನ ಹೃದಯದ ಕಣ್ಣೇ
ದೇಹ ಮಣ್ಣ ಕಾಣುವ ಮುನ್ನ, ಹೆಣ್ಣೇ ಕಣ್ಣ ತೆರೆಸು
ಹೆಣ್ಣೇ ಕಣ್ಣ ತೆರೆಸು
-    ಪತ್ರೇಶ್ ಹಿರೇಮಠ್ ಬಸರಕೋಡು
-----------------------------------------------------
ಏನ ಹೇಳಲಿ ಕಾರಣ
ಅರ್ಧದಲ್ಲೇ
ಕುಸಿದು ಬಿತ್ತು
ನಮ್ಮ ಪ್ರೀತಿ ಚಾರಣ

ನಮ್ಮದ ಆಕಾಶದಲ್ಲಿ
ಗಾಳಿ ಬಳಸಿ ರೆಕ್ಕೆಬಿಚ್ಚಿ
ಹೆಜ್ಜೆಯಿಲ್ಲದ ಪಯಣ ಬೆಳೆಸಲು
ನಾ ಕಾದ ಗಳಿಗೆ
ಯಾರೋ ತೂರಿದ
ಬೆಳಕಿಗೆ ಮೈಯ್ಯೊಡ್ಡಿ
ಮಿರುಮಿರುಗುವ ಚಂದ್ರನಾಗಲು
ನೀ ಬಯಸಿದ ಬಗೆ

ನೆಲದ ವಾಸನೆ ಹೀರಿ
ಅಲೆಯ ಕಲರವ ಹೊತ್ತು
ತೋಳಚಾಚಿ ಹರಿವ ನದಿಯಾಗಲು
ನಾ ಕಾದ ಗಳಿಗೆ
ಹೊತ್ತಲ್ಲದ ಹೊತ್ತಲ್ಲಿ
ಕಣ್ತಪ್ಪಿಸಿ ಸದ್ದಿಲ್ಲದೆ
ಆಚೆಈಚೆ ತೀರ ಸೇರಲು
ನೀ ಬಯಸಿದ ಬಗೆ

ಮಾತು ಮೌನದಿ
ಮಿಂದು ಒಬ್ಬರೊಳಗೊಬ್ಬರು
ಕರಗಿ ಇನ್ನಿಲ್ಲವಾಗಲು
ನಾ ಕಾದ ಗಳಿಗೆ
ಎದ್ದುಕಾಣುವಂತೆ
ನಮ್ಮ ಚಿತ್ರ ಬಿಗಿದು
ಕಟ್ಟಿನ ಗೋಡೆಗೆ ತೂಗುಹಾಕಲು
ನೀ ಬಯಸಿದ  ಬಗೆ

ಮಸಿ ತಾಗಿಸದೆ ಬರೆದ
ತೆರೆದ ಬಿಳಿಹಾಳೆಯಲಿ
ಭಾವಗಳು ಪುಟ ತುಂಬಲೆಂದು
ನಾಕಾದ ಗಳಿಗೆ
ಕೊನೆಯ ತುದಿಗೆ
ಸಹಿ ಇಟ್ಟು ಪಯಣವಿನ್ನು
ಸಾಗದೆಂದು ಷರಾ ಬರೆಯಲು
ನೀ ಬಯಸಿದ ಬಗೆ

ಏನ ಹೇಳಲಿ ಕಾರಣ
ಕುಸಿದುಬಿತ್ತು ನಮ್ಮ ಪ್ರೀತಿ ಚಾರಣ
ಹರಿದುಬಿತ್ತು ಕಟ್ಟಿದ
ಕನಸ ತೋರಣ

ಟಿ.ಎಂ.ಉಷಾರಾಣಿ ಹಡಗಲಿ
--
ಅಡಿ ಟಿಪ್ಪಣಿಗಳು:
ಕೊ.ಹಿ.ಮ: ನವೋದಯ ಮತ್ತು ಬಂಡಾಯ ಸಾಹಿತ್ಯ ಪಂಥಗಳೆರಡರಲ್ಲಿಯೂ ಆಸಕ್ತಿ ಹೊಂದಿರುವ ಹಿರಿಯರಾದ ಬಸರಕೋಡಿನ ಕೊ.ಹಿ.ಮ.ರವರು ಕಾವ್ಯಕುಂಚಗಾಯನದಲ್ಲಿ ಪಾಲುಗೊಂಡಿದ್ದು ವಿಶೇಷ. ನಿರಂತರ ಓದು ಮತ್ತು ಪತ್ರಿಕೆಗಳ ಸಾಂಗತ್ಯದಲ್ಲಿ  ತಮ್ಮ ಬದುಕಿನ ಕೃಷಿಯನ್ನು ಮುಂದುವರೆಸಿದ್ದಾರೆ. ಇನ್ನು ಇವರ ಮಗ ಪತ್ರೇಶ್ ಹಿರೇಮಠ್ರವರು ಹನ್ನೊಂದು ಗಂಟೆಯ ನಂತರ ತಮ್ಮ ಕವಿತೆಯನ್ನು ಓದಿದರೆ, ಕಾವ್ಯಕನ್ನಿಕೆಗೆ ದೃಷ್ಟಿಯಾದೀತೆಂದು ಹಿಂದೆ ಸರಿದು ಅಪ್ಪನ ಕವಿತೆಯನ್ನು ಅದ್ಭುತವಾಗಿ ಹಾಡಿದ ನಾಗರಾಜ್ ಪತ್ತಾರ್ರವರ ಮೋಡಿಯಲ್ಲಿ ತಲ್ಲೀನರಾದರು. 

ಪರುಶುರಾಮ್ ಕಲಾಲ್: ಕನರ್ಾಟಕವಿದು ಗಂಡುಮೆಟ್ಟಿನ ನಾಡಿದು ಎಂದು ಮುಂದಿದ್ದವರ ಎದೆ ತಟ್ಟಿ ತಟ್ಟಿ ಹೇಳುತ್ತಲೇ ಇರುತ್ತಾರೆ. ಇಂತಾ ಸಂದರ್ಭದಲ್ಲಿ ಕಲಾಲ್ರವರು `ಹಂಪಿ ಹಾಡುತಿಹಳು' ಎಂಬ ಕವಿತೆಯನ್ನು ಹೇಳುವ ಮೂಲಕ ಹೆಂಗಳೆಯರೂ ಗಂಡುಮೆಟ್ಟಿನ ನಾಡಿನ ಇತಿಹಾಸ ನಿಮರ್ಾಪಕರೆಂದು ಸಾರಿದರು.

ಅರುಣ್ ಜೋಳದ ಕೂಡ್ಲಿಗಿ: ಇಂಟರ್ನ್ಯಾಷ್ನಲ್ ಸೆಮಿನಾರಿಗೆ ಹೋಗಿ ಬಂದಂದಿನಿಂದ ಇವರು ಅರುಣ್ ಕಠ್ಮಂಡು ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇವರು ತಮ್ಮ ಮದುವೆಗೂ ಮುಂಚಿನ ದಿನಗಳನ್ನು ನೆನಪುಮಾಡಿಕೊಡುವ `ತಂಪು ಮುಂಜಾವಿನ' ಕವಿತೆಯನ್ನು ಮಂಡಿಸಿದರು.

ವಿ.ಹರಿನಾಥ ಬಾಬು: ಎರಡೂವರೆ ತಾಸು ವೇದಿಕೆ ಮೇಲೆ ಮಿಟ್ಟುಮಿಸುಕದೆ ಕೈಕಟ್ಟಿ ಕುಳಿತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ. ಬಯಲು ಸಾಹಿತ್ಯ ವೇದಕೆಯ ನಿರಂಜನರವರು `ತಾಳ್ಮೆ ಕವಿ' ಎಂಬ ಬಿರುದನ್ನು ದಯಪಾಲಿಸಿದ್ದಾರೆ.

ಜಿ.ಶಿವಕುಮಾರ್: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿರುವ ಜಿ.ಶಿವಕುಮಾರ್ರವರಿಗೆ 2012ನೇ ಸಾಲಿನ ಡಾ|ಬಿ.ಆರ್.ಅಂಬೇಡ್ಕರ್ ನ್ಯಾಶನಲ್ ಫೆಲೋಶಿಪ್ ಪ್ರಶಸ್ತಿ ಲಭಿಸಿದೆ. ಅವರು ತಮ್ಮ ಕವಿತೆಯನ್ನು ವಾಚಿಸಿದರು. 
ಸೋಮೇಶ್ ಉಪ್ಪಾರ್: ಕಾರ್ಯಕ್ರಮಕ್ಕೆ ಲೇಟಾಗಿ ಬಂದು ವೇದಿಕೆಯನ್ನೂ ಏರದೆ ತಮ್ಮ ಕವಿತೆಯನ್ನು ಓದಿ ಉಸ್ಸಪ್ಪ ಎಂದು ತಣ್ಣಗೆ ಕುಳಿತದ್ದೇ ತಪ್ಪಾಯಿತು. ಪಲ್ಲವ ವೆಂಕಟೇಶರೆಂದೇ ಖ್ಯಾತನಾಮರಾಗಿರುವ ಹೊಸಪೇಟೆಯ ಕಸಾಪ ಅಧ್ಯಕ್ಷರು ಜಿ.ಶಿವಕುಮಾರ್ರವರ ಕಾವ್ಯಕ್ಕೆ ರಾಗ ಸಂಯೋಜಿಸಿ ಹಾಡಲು ಅಪ್ಪಣೆ ನೀಡಬೇಕೆ? ಅಮಾಯಕ ಸೋಮೇಶನ ಸಂದಿಗ್ಧಸ್ಥಿತಿಗೆ ಗೆಳೆಯರ ಗುಂಪು ಕರುಣೆಯ ಕಣ್ಣೀರ್ಗರೆದು ವೇದಿಕೆಗೆ ಕಳಿಸಿಕೊಟ್ಟರು.

ಸ್ವರೂಪಾನಂದ: ಲೇಖನಗಳನ್ನು ಬರೆದು ಬರೆದು ಸಾಕಾಗಿ ಬೇಸತ್ತು ಕವಿತೆಯತ್ತ ಹೊರಳಿರುವ ಸ್ವರೂಪರವರು, ಮದುವೆಯಾಗುವ ಸಂದರ್ಭದಲ್ಲಿ ತಮ್ಮ ಸ್ವರೂಪವನ್ನು ಬದಲಿಸಿಕೊಂಡಿರುವುದು ಹೊಸ ಸಂಗತಿ. ಕವಿತೆ ಬರೆಯುವುದು ಹೇಗೆ? ಸ್ವರೂಪನ ಪ್ರಶ್ನೆಗೆ: ಕವಿತೆಯ ಗೀಳು ಹತ್ತಿಸಿಕೊಂಡ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ಸಿದ್ದು ದೇವರ ಮನೆಯವರು ಕೊಟ್ಟ ಉತ್ತರ- ನಿನ್ನ ಲೇಖನದ ವಾಕ್ಯಗಳನ್ನು ತುಂಡುತುಂಡಾಗಿ ಕತ್ತರಿಸಿಡುವುದು.


ಕಾಮೆಂಟ್‌ಗಳಿಲ್ಲ: