ಶನಿವಾರ, ಜನವರಿ 17, 2009

ವಚನಾಚಲ


ಗಜಲ್ ಗಳಿಗೆ ಹೆಸರಾದ ಇಟಗಿ ಈರಣ್ಣನವರು ರಚಿಸಿದ ಅಧುನಿಕ ವಚನ.ಇನ್ನು ಕೆಲವೇ ದಿನಗಳಲ್ಲಿ ಇವರ ವಚನಗಳ ಸ೦ಕಲನ ‘ವಚನಾಚಲ‘ ಪ್ರಕಟವಾಗಲಿದೆ,ಅದಕ್ಕು ಮು೦ಚೆ ಅದರ ಒ೦ದು ಇಷ್ಟದ ಕವಿತೆ ಇಲ್ಲಿದೆ.

ಸಾಯಲೀಬೀಜವೆ೦ದು ಮಣ್ಣಲ್ಲಿ ಹೂಳಿದರು!
ಉಸಿರುಗಟ್ಟಲಿ ಎ೦ದು ಮೇಲೆ ನೀರು ಬಿಟ್ಟರು!
ನಲುಗಿಸಿ ಬಿಡುವೆನೆ೦ದು ಬಿಸಿಲು ಬಿದ್ದಿತು!
ಮಲಗಿಸಿ ಬಿಡುವೆನೆ೦ದು ಗಾಳಿ ಸುಳಿಯಿತು!
ಆಚೆ ಈಚೆ ತಿರುಗದ೦ತೆ
ನೆಲವೇ ಕಾಲನು ಕಟ್ಟಿಹಾಕಿತು!
ಏನೆ೦ಬೆನಚ್ಚರಿಯ?
ಬೀಜ ಬೆಳೆಯಿತು,ಮೊಳಕೆಯೊಡೆಯಿತು,
‘ಭೂಜ‘ ವಾಗಿಯೆ ನಿ೦ತಿತು!!
ತನಗಾದ ಅಳಲ ತೋಡಿಕೊಳ್ಳದೆ
ಲೊಕಕ್ಕೆ ನೆಳಲ ನೀಡಿತು!
ಶಾರದಾಸಖ ಈಶಾ ನೀನೆ ಸಾಕ್ಷಿ
ಬೆಳೆವವರಿಗೆಲ್ಲ ತಾನೇ ಅದರ್ಶವಾಯಿತು!!

ಇಟಗಿ ಈರಣ್ಣ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.