ಭಾನುವಾರ, ಡಿಸೆಂಬರ್ 7, 2008

ಹಿಂಗುವುದೇ ತನು ಸೂತಕ ಹಿಂಗಲಾರದೇ ಮನ ಸೂತಕ?

(ಪ್ರಜಾವಾಣಿಯಲ್ಲಿ ಪ್ರಕಟವಾದ ಪ್ರೊ.ಬಿ.ಎ.ವಿವೇಕ್ ರೈರವರ ಲೇಖನದ ಆಯ್ದ ಭಾಗ)
ಧರ್ಮವೊಂದು ಗನ್ನಿನಿಂದ ಕೊಲ್ಲುವ ಮೂಲಕ, ರಕ್ತ ಹರಿಸುವ ಮೂಲಕ ತನ್ನ ಕ್ರೂರ ಪ್ರದರ್ಶನ ಮಾಡುವಲ್ಲಿ ಹಣದ ಬಲ ಖಂಡಿತವಾಗಿಯೂ ಪ್ರಧಾನವಾಗಿದೆ. ಪಂಚತಾರಾ ಹೋಟೆಲ್ ಮತ್ತು ಎಕೆ 47 ಇವೆರೆಡೂ ಹಣದ ಕೊಬ್ಬಿನ ಎರಡು ರೂಪಕಗಳು. ಒಂದು ಭೋಗ, ಇನ್ನೊಂದು ಹಿಂಸೆ. ಭದ್ರತೆ, ಹುನ್ನಾರ, ತಂತ್ರಗಾರಿಕೆ-ಇವೆಲ್ಲಾ ರಾಜಕೀಯ ವ್ಯವಸ್ಥೆಯನ್ನು ಬಲಪಡಿಸಬಹುದು: ಆದರೆ ಜನಸಾಮಾನ್ಯರ ಪಾಲಿಗೆ ಇವು ಭಯ ಮತ್ತು ಆತಂಕದ ಕರಾಳ ಸ್ವಪ್ನಗಳು...
ಯಾವುದೇ ವ್ಯಕ್ತಿ ಸ್ವಭಾವತ: ಮತಾಂಧ ಆಗಿರುವುದಿಲ್ಲ. ಆದರೆ ಒಂದು ಮತದ ಒಳಗಡೆ ತನ್ನನ್ನು ಗುರುತಿಸಿಕೊಳ್ಳುವುದು ಅನಿವಾರ್ಯ ಎಂಬ ಕೃತಕ ವಾತಾವರಣ ನಿಮರ್ಾಣವಾಗಿರುವುದು ರಾಜಕೀಯದಲ್ಲಿ ನಿಶೇಧಾತ್ಮಕ ರೂಪದಲ್ಲಿ. ಆದ್ದರಿಂದಲೇ ಇದು ಸಂಘರ್ಷವನ್ನೇ ತನ್ನ ಉದ್ದೇಶವನ್ನಾಗಿ ಇಟ್ಟುಕೊಂಡಿರುತ್ತದೆ. ರಾಜಕೀಯ ಮತ್ತು ಧಾಮರ್ಿಕ ಚಳುವಳಿಗಳು ಆಧುನಿಕ ಸಮಾಜಗಳ ಹೊಸ ಅಗತ್ಯಗಳಿಗೆ ಬೇಕಾದ ಅನನ್ಯತೆಗಳನ್ನು ರೂಪಿಸಲು ಅಶಕ್ತವಾದಾಗ ಮೂಲಭೂತವಾದದ ಪ್ರವೃತ್ತಿಯನ್ನು ಹೆಚ್ಚು ಪ್ರೋತ್ಸಾಹಿಸುತ್ತವೆ. ಮೂಲ ಪರಂಪರೆಗೆ ಹಿಂದಿರುಗಲು ಒತ್ತಾಸೆ ನೀಡುವ ಇವು ಮೂಲ ಪರಂಪರೆ ಬಗ್ಗೆ ತಮ್ಮದೇ ಆದ ಸೀಮಿತ ಹಾಗೂ ತಪ್ಪು ಕಲ್ಪನೆಗಳನ್ನು ಹೊಂದಿರುತ್ತವೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಮತೀಯ ಮೂಲಭೂತವಾದ ಈ ಸ್ವರೂಪದ್ದು. ಇಲ್ಲೆಲ್ಲಾ ಮತಧರ್ಮ ಎನ್ನುವುದು ವ್ಯವಾಹಾರಿಕ ಉದ್ದೇಶಕ್ಕಾಗಿ ಬಳಕೆಯಾಗುವ ರಾಜಕೀಯ ಸಾಧನವೇ ಹೊರತು, ಅದೇ ನಿಜವಾದ ಅನನ್ಯತೆಯಾಗಿ ಉಳಿದಿಲ್ಲ.
ಜಾಗತೀಕವಾಗಿ ಬಲಿಷ್ಠ ರಾಷ್ಟ್ರಗಳು, ದುರ್ಬಲ ರಾಷ್ಟ್ರಗಳು ತಮ್ಮ ಶಕ್ತಿಯ ವಿಸ್ತರಣೆಗಾಗಿ ಮತ್ತು ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ಬಾಹ್ಯ ಯುದ್ಧ ಮತ್ತು ಗುಪ್ತ ಯುದ್ಧಗಳಿಗೆ ಬೆಂಬಲವನ್ನು ಕೊಡುತ್ತವೆ. ಅಮೇರಿಕ ಮತ್ತು ಚೀನಾದಂತಹ ರಾಷ್ಟ್ರಗಳು ಜಾಗತಿಕ ಪ್ರಭುತ್ವದ ರ್ಯಾಂಕಿಗಾಗಿ ಅನ್ಯ ದೇಶಗಳ ನಡುವಿನ ವೈಮನಸ್ಸನ್ನು, ಆಂತರಿಕ ದೌರ್ಬಲ್ಯಗಳನ್ನು ಒಂದು ಲಾಭವನ್ನಾಗಿ ಮಾಡಿಕೊಂಡು ಯುದ್ಧ ಮತ್ತು ಶಾಂತಿಯ ಮಂತ್ರಗಳನ್ನು ಒಟ್ಟಿಗೆ ಜಪಿಸುತ್ತವೆ. ಘಾಸಿ ಮಾಡುವ ಮತ್ತು ಆರೈಕೆ ಮಾಡುವ ಎರಡೂ ಕೆಲಸಗಳನ್ನು ಒಟ್ಟಿಗೇ ಮಾಡುವ ಕಾರ್ಯತಂತ್ರ ರಾಷ್ಟ್ರೀಯತೆಗೆ ಬಲಿಷ್ಠತೆಯನ್ನು ತಂದುಕೊಡುವ ಒಂದು ಮುಖ್ಯವಾದ ಮಾರ್ಗ. ಆಥರ್ಿಕವಾಗಿ ದುರ್ಬಲವಾಗಿರುವ, ಆದರೆ ಹೊರ ಜಗತ್ತಿಗೆ ಆಧುನಿಕ ಸೌಕರ್ಯಗಳ ಸಂಪತ್ತುಗಳ ಪ್ರದಶರ್ಿಸುವ ದೇಶಗಳು ತಮ್ಮ ಆಡಳಿತದ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಆಕ್ರಮಣಶೀಲತೆಯನ್ನು ಪ್ರಚೋದಿಸುವ ಕೆಲಸಗಳನ್ನು ನಿರಂತರವಾಗಿ ಮಾಡುತ್ತಲಿದೆ. ಪ್ರಜೆಗಳನ್ನು ಕಾಯಲು ಸಾಧ್ಯವಾಗದವರು ಅನ್ಯರ ಮೇಲೆ ಆಕ್ರಮಣ ಮಾಡಲು ಅಭಿಪ್ರಾಯ ನಿಮರ್ಾಣದ ಕಾಖರ್ಾನೆಗಳನ್ನು ತೆರೆದು ದ್ವೇಷದ ಉತ್ಪನ್ನಗಳನ್ನು ಉತ್ಪಾದಿಸಿ, ಜನರನ್ನು ನಿರಂತರ ಭಯೋತ್ಪಾದನೆಯ ಯುದ್ಧದ ಸರ್ಪದ ಹೆಡೆ ನೆರಳಲ್ಲಿ ಬದುಕಬೇಕಾದ ಅನಿವಾರ್ಯತೆಗೆ ತಂದೊಡ್ಡುತ್ತಾರೆ.
ಪಾಕಿಸ್ತಾನ, ಬಾಂಗ್ಲದೇಶದಂತಹ ದೇಶಗಳು ದ್ವೇಷದ ಕಾಖರ್ಾನೆಗಳಲ್ಲಿ ಮತಧರ್ಮದ ಸರಕುಗಳನ್ನು ನಿಮರ್ಿಸುತ್ತಿರುವ ಕ್ರಮ ಈ ಬಗೆಯದ್ದು. ಇದು ಖಂಡಿತ ಅಲ್ಲಿನ ಜನಗಳ ನಿಜವಾದ ನಿಜವಾದ ನೆಲೆಯ ಭಾವನೆಗಳಲ್ಲ. ಇಂತಹ ಸ್ಥಿತಿಯಲ್ಲಿ ಭಾರತ ಯಾವುದನ್ನು ತನ್ನ ಆದರ್ಶವನ್ನಾಗಿ ಇಟ್ಟುಕೊಳ್ಳಬೇಕೆನ್ನುವುದು ನಮ್ಮ ಅನನ್ಯತೆಯ ಮುಖ್ಯ ಪ್ರಶ್ನೆ. ಬಲಿಷ್ಠ ರಾಷ್ಟ್ರಗಳ ಕೊಲ್ಲುವ-ಕಾಯುವ ಮಾದರಿಯನ್ನೇ? ಆಥರ್ಿಕವಾಗಿ ನೈತಿಕವಾಗಿ ಜರ್ಜರಿತವಾಗಿರುವ ರಾಷ್ಟ್ರಗಳಿಗೆ ಪ್ರತಿರೋಧವಾಗಿ ಅವುಗಳದ್ದೇ ಮಾದರಿಯನ್ನೇ? ಈ ಎರಡಕ್ಕಿಂತಲು ಭಿನ್ನವಾಗಿ ಭಾರತದ ಪರಂಪರೆಯ ಶಕ್ತಿ, ಧೈರ್ಯ, ಛಲ, ಸೃಜನಶೀಲತೆ, ಬಹುರೂಪಿ ಬದುಕಿನ ಸಾಧ್ಯತೆ, ಕಾಯಕದ ಬಗೆಗಿನ ಅಪಾರವಾದ ನಂಬಕೆ ಮತ್ತು ಇಂತಹ ನೂರಾರು ಶಕ್ತಿಗಳನ್ನು ಕ್ರೂಢೀಕರಿಸಿದ ಬಲಿಷ್ಠ ಬಹುರೂಪಿ ಶಕ್ತಿಯೊಂದರ ನಿಮರ್ಾಣದ ಮೂಲಕ ಜಾಗತಿಕವಾಗಿ ಹೊಸ ಮಾದರಿಯೊಂದನ್ನು ಕಟ್ಟಲು ಸಾಧ್ಯವೇ?.....

ಕಾಮೆಂಟ್‌ಗಳಿಲ್ಲ: